ಕೆ ಎಲ್ ಇ ಆಸ್ಪತ್ರೆಯ ವೈದ್ಯ ಅನುಮಾಸ್ಪದವಾಗಿ ಸಾವು!
ಅಂಕೋಲಾ: ತಾಲೂಕಿನ ಕೆ ಎಲ್ ಇ ಸೊಸೈಟಿಯ ಕಮಲ್ ಹಾಗೂ ಆರ್ ಎನ್ ನಾಯಕ ಆಸ್ಪತ್ರೆಯ ವೈದ್ಯರೋರ್ವರು ಕೊಠಡಿಯಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

ಹೌದು…ಕಳೆದ ಕೆಲ ವರ್ಷಗಳಿಂದ ಅಂಕೋಲಾ ಕೆ ಎಲ್ ಇ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಡಾ. ವೆಂಕಟೇಶ್ ಬಿ ಎ ಎಂ ಎಸ್ 3 ದಿನ ರಜೆ ಹಾಕಿದ್ದರು ಎನ್ನಲಾಗಿದೆ. ರಜೆ ದಿನಗಳಲ್ಲಿ ಡಾ. ಬಾಗಿಲು ಹಾಕಿಕೊಂಡಿರುವುದನ್ನು ಗಮನಿಸಿದ ಆಸ್ಪತ್ರೆ ಸಿಬ್ಬಂದಿ ಬಾಗಿಲು ತಟ್ಟಿದ್ದಾರೆ,ಬಾಗಿಲು ತೆರೆಯದಿದ್ದರಿಂದ ನೆರೆಯ ವೈದ್ಯರಾದ ಡಾ.ಯತಿನ್ ಅವರಲ್ಲಿ ಕೇಳಿಕೊಂಡಾಗ ಅವರು ಸಹ ಜೋರಾಗಿ ಬಾಗಿಲು ತಟ್ಟಿದ್ದಾರೆ ಅದರ ರಭಸಕ್ಕೆ ಬಾಗಿಲು ತೆರೆದಿದ್ದು,ವೈದ್ಯ ವೆಂಕಟೇಶ್ ಅವರು ಬಾಯಿಯಿಂದ ರಕ್ತ ವಾಂತಿಯಾಗಿದ್ದ ರೀತಿಯಲ್ಲಿ ಮೃತದೇಹ ಕಂಡುಬಂದಿದೆ ಎನ್ನಲಾಗಿದೆ.
ತಕ್ಷಣ ಅಂಕೋಲಾ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು ಪಿಎಸೈ ಗುರುನಾಥ್ ಹಾದಿಮನಿ ಹಾಗೂ ಸುನೀಲ್ ಹುಳ್ಳೊಳ್ಳಿ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಮೃತದೇಹವನ್ನು ಮರೋಣೋತ್ತರ ಪರೀಕ್ಷೆಗೆ ತಾಲೂಕಾಸ್ಪತ್ರೆಗೆ ಸಾಗಿಸಲಾಗಿದೆ.
